ಸಂಸತ್ತಿನ ಮುಂಗಾರು ಅಧಿವೇಶನವನ್ನು ಪ್ರತಿದಿನವೂ ಮುಂದೂಡುತ್ತಿರುವುದು ಶೋಚನೀಯ. ಸಭೆಯಲ್ಲಿ ಯಾವ ವಿಷಯದ ಮೇಲೂ ಅರ್ಥಪೂರ್ಣವಾದ ಚರ್ಚೆಗಳು ನಡೆಯದೆ ಸದಸ್ಯರು ಸಂಸತ್ತಿನ ಸಮಯ, ಹಣವನ್ನು ವ್ಯರ್ಥ ಮಾಡುತ್ತಿರುವುದು ಪ್ರಜಾಪ್ರಭುತ್ವವನ್ನು ಅಪಹಾಸ್ಯ ಮಾಡುವಂತಿದೆ. ಇನ್ನಾದರೂ ಆಡಳಿತಾರೂಢ ಮತ್ತು ವಿರೋಧ ಪಕ್ಷಗಳ ಜನಪ್ರತಿನಿಧಿಗಳು ಸದನದಲ್ಲಿ ಸಂಯಮದಿಂದ ನಡೆದುಕೊಂಡು ಅರ್ಥಪೂರ್ಣ ಚರ್ಚೆಗೆ ಅವಕಾಶ ಮಾಡಿಕೊಡಬೇಕು.