ಫಿರೋಜ್ ಖಾನ್ ಎಂಬುವರು ತಮ್ಮ ಸಂಸ್ಕೃತ ಅಧ್ಯಾಪಕರಾಗಿ ನೇಮಕಗೊಂಡಿರುವುದನ್ನು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವಿರೋಧಿಸುತ್ತಿದ್ದಾರೆ. ಈ ವಿಷಯ ಒತ್ತಟ್ಟಿಗಿರಲಿ, ಭಾರತ ಸರ್ಕಾರವು ಬನಾರಸ್ ಹಿಂದೂ ವಿಶ್ವವಿದ್ಯಾಲಯ ಮತ್ತು ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯ ಎಂಬ ಹೆಸರುಗಳನ್ನು ಬದಲಿಸದೆ ಹಾಗೇ ಬಿಟ್ಟಿರುವುದೇಕೆ? ಸೆಕ್ಯುಲರಿಸಂ ತತ್ವದ ಆಧಾರದ ಮೇಲೆ ರಚಿತವಾದ ಸರ್ಕಾರ ಈ ಕೆಲಸ ಮಾಡದೇ ಇರುವುದು ಸರಿಯೇ?