ಆ ಬಳಿಕ, ಶಾಸಕರ ರಾಜೀನಾಮೆಯ ಪ್ರಹಸನ ಎಲ್ಲರಿಗೂ ತಿಳಿದಿರುವಂತಹುದೆ. ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿತು. ಬಿಜೆಪಿಯು ಚುಕ್ಕಾಣಿ ಹಿಡಿಯಿತು. ಈಗ ಉಪಚುನಾವಣೆ ಫಲಿತಾಂಶ ಹೊರಬಿದ್ದಿದೆ. 12 ಕ್ಷೇತ್ರಗಳಲ್ಲಿ ಗೆದ್ದು ಬಿಜೆಪಿ ಬಲ ಹೆಚ್ಚಿಸಿಕೊಂಡಿದೆ. ಸ್ಥಿರತೆಗಾಗಿ ಮತದಾರರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಆ ಸಂದೇಶವನ್ನು ಸರ್ಕಾರ ಅರಿತು ನಡೆದುಕೊಳ್ಳಬೇಕಿದೆ.