ಎಚ್.ವಿಶ್ವನಾಥ್ ಅವರು ಸಾಹಿತ್ಯ ಕೋಟಾದಡಿ ವಿಧಾನ ಪರಿಷತ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಅಪ್ಪಟ, ಪೂರ್ಣ ಪ್ರಮಾಣದ ರಾಜಕಾರಣಿಯೊಬ್ಬರು ಪರಿಷತ್ಗೆ ನಾಮಕರಣಗೊಳ್ಳಲು ಸಾಹಿತ್ಯದ ಮೊರೆ ಹೋಗಿರುವುದು ಪ್ರಸ್ತುತ ಅಧಿಕಾರದಾಹದ ರಾಜಕೀಯ ಪರಿಸರದಲ್ಲಿ ಅಸಂಗತ ಸಂಗತಿಯೇನಲ್ಲ. ಸೃಜನಶೀಲ ಸಾಹಿತಿ ಮಾತ್ರ ಸಾಹಿತ್ಯ ಕ್ಷೇತ್ರವನ್ನು ಪ್ರತಿನಿಧಿಸಬೇಕೆಂಬ ನಿರ್ಬಂಧವಾದರೂ ಎಲ್ಲಿದೆ? ಸಾಹಿತ್ಯ, ಸಾಂಸ್ಕೃತಿಕ ವಲಯದ ವ್ಯಾಖ್ಯೆಯನ್ನು ಬೇಕಾದಷ್ಟು ಹಿಗ್ಗಿಸಬಹುದಾಗಿದೆ.