ಆರ್ಎಸ್ಎಸ್ ಮುಖಂಡ ದತ್ತಾತ್ರೇಯ ಹೊಸಬಾಳೆಯವರು ಸಂದರ್ಶನದಲ್ಲಿ (ಪ್ರ.ವಾ., ಮೇ 20)‘ಗ್ಲೋಬಲೈಸೇಶನ್ನಿನಿಂದ ಲೋಕಲೈಸೇಷನ್ಗೆ ಹೊರಳಲು ಇದು ಸಕಾಲ. ಈಗ ನಮ್ಮದು ಗ್ಲೋಕಲೈಸೇಷನ್ (ದೇಸಿ ಜಾಗತೀಕರಣ) ಆಗಬೇಕು’ ಎಂದು ಹೇಳಿರುವುದು ಸ್ವಾಗತಾರ್ಹ. ನಮ್ಮ ದೇಶದ ಆಯಾ ರಾಜ್ಯದಲ್ಲಿ ಆಯಾ ರಾಜ್ಯ ಭಾಷೆಯು ಶಿಕ್ಷಣ ಮಾಧ್ಯಮ ಮತ್ತು ಆಡಳಿತ ಭಾಷೆಯಾಗಬೇಕು. ಸುಪ್ರೀಂ ಕೋರ್ಟಿನ ಆದೇಶದಿಂದಾಗಿ, ಆಯಾ ರಾಜ್ಯ ಭಾಷೆಯನ್ನು ಕಡ್ಡಾಯ ಶಿಕ್ಷಣ ಮಾಧ್ಯಮವನ್ನಾಗಿ ಮಾಡಲಾಗಿಲ್ಲ.