ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಅವೈಜ್ಞಾನಿಕ ಸಮಯ ಮಿತಿ

Last Updated 30 ಏಪ್ರಿಲ್ 2021, 22:08 IST
ಅಕ್ಷರ ಗಾತ್ರ

ಪ್ರಸಕ್ತ ಲಾಕ್‌ಡೌನ್‌ ಅವಧಿಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ಅವಕಾಶ ನೀಡಿರುವುದು ಅತ್ಯಂತ ಅವೈಜ್ಞಾನಿಕವಾದುದು. ಇದರಿಂದ ನಿಗದಿತ ಅವಧಿಯೊಳಗೆ ಸಾರ್ವಜನಿಕರೆಲ್ಲರೂಮಾರುಕಟ್ಟೆಗೆ ಬರುವುದು ಅನಿವಾರ್ಯವಾಗಿ, ಸಹಜವಾಗಿಯೇ ಜನದಟ್ಟಣೆ ಉಂಟಾಗುತ್ತದೆ. ಮತ್ತದೇ ಲಾಠಿಚಾರ್ಜ್, ಮತ್ತದೇ ಗೋಳು. ಕಳೆದ ವರ್ಷವೂ ಇಂಥದ್ದೇ ತೀರ್ಮಾನ ತೆಗೆದುಕೊಂಡಾಗ ಆದ ಸಮಸ್ಯೆಗಳು ಸರ್ಕಾರದ ಗಮನದಲ್ಲಿ ಇಲ್ಲವೇ?

ತರಕಾರಿ, ದಿನಸಿ ವ್ಯಾಪಾರಕ್ಕೆ ದಿನವಿಡೀ ಅವಕಾಶ ನೀಡಿದರೆ ಸಾರ್ವಜನಿಕರು ಅಂತರ ಕಾಯ್ದುಕೊಂಡು ಬೇರೆ ಬೇರೆ ಸಮಯದಲ್ಲಿ ಮಾರುಕಟ್ಟೆಗೆ ಬಂದು ಹೋಗಲು ಅನುಕೂಲವಾಗುತ್ತದೆ. ಇದರಿಂದ ಜನಸಾಂದ್ರತೆಯನ್ನು ಬಹುತೇಕ ಕಡಿಮೆ ಮಾಡಬಹುದು. ಪೊಲೀಸರಿಗೂ ತಲೆಬಿಸಿ ಕಡಿಮೆಯಾಗುತ್ತದೆ.

-ಸೋಮಲಿಂಗಪ್ಪ ಬೆಣ್ಣಿ ಗುಳದಳ್ಳಿ, ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT