ಜೆ.ಪಿ. ಅವರ ಕರ್ಮಕ್ಷೇತ್ರ ಬಿಹಾರದಲ್ಲಿ ರಾಜಕೀಯ ಇನ್ನೊಮ್ಮೆ ಮಗ್ಗುಲು ಬದಲಿಸಿದೆ. ಒಡಿಶಾದ ಬಿಜೆಡಿಯು ಬಿಜೆಪಿ ಬಗೆಗೆ ಸ್ಥಿರ ನಿಲುವನ್ನು ತೋರುತ್ತ ಬಂದಿದೆ. ಆದರೆ ಜೆಡಿಯು ಒಮ್ಮೆ ಅದರ ಜತೆ ಇರುವುದು, ಇನ್ನೊಮ್ಮೆ ಹೊರನಡೆಯುವುದು ಮಾಡುತ್ತ ಬಂದಿದೆ. ಸಿದ್ಧಾಂತ, ವೈಚಾರಿಕ ಮತಭೇದ ಕಾರಣ ಎಂದೇನೂ ಹೇಳಲಾಗಿಲ್ಲ. ನಿತೀಶ್ ಕುಮಾರ್ ಅವರಿಗೆ ಭವಿಷ್ಯದ ಬಗೆಗೆ ಆತ್ಮವಿಶ್ವಾಸ ಇಲ್ಲದಿರುವುದು ಸ್ಪಷ್ಟ.