ಸಾಧನೆಗಳು ಒಂದೆಡೆ ಇರಲಿ, ಕೋಮು ಕೋಮುಗಳ ನಡುವೆ ವಿನಾಕಾರಣ ದ್ವೇಷ, ಅಸಹನೆ, ತಿರಸ್ಕಾರ ದಿನೇ ದಿನೇ ಹೆಚ್ಚಾಗುತ್ತ ಸಮಾಜದ ಆರೋಗ್ಯ ಹದಗೆಡುತ್ತಿರುವುದನ್ನು ಎಲ್ಲರೂ ಕಾಣುತ್ತಿದ್ದೇವೆ. ದಿನನಿತ್ಯದ ಜನಸಾಮಾನ್ಯರ ಬವಣೆಗಳಿಗೆ ತುರ್ತಾಗಿ ಸ್ಪಂದಿಸುವುದು ಜವಾಬ್ದಾರಿಯುತ ಸರ್ಕಾರದ ಆದ್ಯತೆ ಆಗದಿದ್ದರೆ ಅದೆಂಥ ಜನಪರ ಆಡಳಿತವಾದೀತು? ಅಥವಾ ಅಂತಹ ನಿರೀಕ್ಷೆ ಇಟ್ಟುಕೊಳ್ಳುವುದೇ ಮೂರ್ಖತನವೇ? ಸಂಭ್ರಮಪಡಲು ಅವರದ್ದೇ ಕಾರಣಗಳಿರಬಹುದು. ಆದರೆ ಆತ್ಮವಿಮರ್ಶೆಗೂ ಅವಕಾಶವಾಗಲಿ ಎಂದು ಆಶಿಸೋಣ.