ಭಾರತೀಯ ಜೀವ ವಿಮಾ ನಿಗಮದಲ್ಲಿ ಕೇಂದ್ರ ಸರ್ಕಾರ ಹೊಂದಿರುವ ಬಂಡವಾಳದ ಪೈಕಿ
ಶೇ 10ರವರೆಗೆ ವಿಕ್ರಯ ಮಾಡಲಾಗುವುದು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿಯ ಬಜೆಟ್
ಮಂಡನೆ ವೇಳೆ ತಿಳಿಸಿದ್ದಾರೆ. ಸಮಾಜದ ವಿವಿಧ ಸ್ತರಗಳಿಗೆ ಸೇರಿದ ಜನ, ಬಹುಮುಖ್ಯವಾಗಿ ಪಾಲಿಸಿದಾರರು ಎಲ್ಐಸಿ ಖಾಸಗೀಕರಣದ ವಿರುದ್ಧ ದನಿ ಎತ್ತಿದ್ದಾರೆ.