ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃತ್ಯುಕೂಪವಾಗದಿರಲಿ ಮ್ಯಾನ್‌ಹೋಲ್‌

Last Updated 29 ಜನವರಿ 2021, 19:30 IST
ಅಕ್ಷರ ಗಾತ್ರ

ಕಲಬುರ್ಗಿಯಲ್ಲಿ ಮ್ಯಾನ್‌ಹೋಲ್‌ಗೆ ಇಳಿದ ಇಬ್ಬರು ಪೌರಕಾರ್ಮಿಕರು ಸಾವಿಗೀಡಾಗಿರುವುದನ್ನು ತಿಳಿದು ಮನಸ್ಸಿಗೆ ತುಂಬಾ ನೋವಾಯಿತು. ಗುತ್ತಿಗೆ ಪೌರ ಕಾರ್ಮಿಕರು ವೃತ್ತಿ ಭದ್ರತೆಯಿಲ್ಲದೆ, ಹೊಟ್ಟೆಪಾಡಿಗಾಗಿ ಹೀಗೆ ತಮ್ಮ ಪ್ರಾಣವನ್ನೇ ಪಣಕ್ಕೆ ಇಡಬೇಕಾಗಿದೆ. ಒಳಚರಂಡಿ ಸ್ವಚ್ಛತೆ ಇಲ್ಲವೇ ದುರಸ್ತಿ ಕೆಲಸಗಳನ್ನು ಯಂತ್ರೋಪಕರಣಗಳ ನೆರವಿನಿಂದ ಮಾಡಬೇಕು. ಸುರಕ್ಷಾ ಸಾಧನಗಳಿಲ್ಲದೆ ಬಡಪಾಯಿಗಳನ್ನು ಮ್ಯಾನ್‌ಹೋಲ್‌ಗೆ ಇಳಿಸುವ ಮೂಲಕ ಅವರ ಜೀವಗಳ ಜತೆ ಚೆಲ್ಲಾಟ ಆಡುವ ಪ್ರವೃತ್ತಿ ನಿಲ್ಲಬೇಕು.

- ಶ್ರೀಧರ ಎಸ್. ವಾಣಿ,ಕಲ್ಲತಾವರಗೇರಿ, ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT