ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಠಾಧೀಶರು ಜಾತಿಯ ಹೆಸರಿನಲ್ಲಿ ಸಮುದಾಯ ಒಡೆಯಬಾರದು

Last Updated 29 ಜೂನ್ 2018, 17:30 IST
ಅಕ್ಷರ ಗಾತ್ರ

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕೆಂಪೇಗೌಡರ ಜಯಂತಿ ಕಾರ್ಯಕ್ರಮದ ವೇದಿಕೆಯಲ್ಲಿದ್ದ ಸ್ವಾಮೀಜಿಗಳು ‘ಸರ್ಕಾರವನ್ನು ಪತನಗೊಳಿಸುವ ಪ್ರಯತ್ನ ಮಾಡುವುದನ್ನು ಸಹಿಸುವುದಿಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ (ಪ್ರ.ವಾ., ಜೂನ್ 28).

ಜನರ ನಡುವೆ ಸಾಮರಸ್ಯ ಉಂಟುಮಾಡಬೇಕಾದವರೇ ಆ ವೇದಿಕೆಯಲ್ಲಿ ಜಾತಿಯ ಬೀಜವನ್ನು ಬಿತ್ತುವಂಥ ಮಾತನಾಡಿರುವುದು ಸರಿಯಲ್ಲ. ಸರ್ಕಾರವು ಸಂವಿಧಾನಕ್ಕೆ ಮತ್ತು ಜನರಿಗೆ ಉತ್ತರದಾಯಿಯೇ ಹೊರತು ಮಠಗಳಿಗಲ್ಲವೆಂಬುದನ್ನು ಇವರು ಅರ್ಥಮಾಡಿಕೊಳ್ಳಲಿ.

ಮಠಾಧೀಶರು ಜಾತಿಯ ಹೆಸರಿನಲ್ಲಿ ಸಮುದಾಯವನ್ನು ಒಡೆಯುವುದನ್ನು ನಿಲ್ಲಿಸಿ, ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಮೂಡಿಸಲು ಮಾರ್ಗದರ್ಶನ ನೀಡಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT