ಪ್ರತಿಯೊಬ್ಬರಲ್ಲೂ ಈ ಆರ್ದ್ರ ಭಾವ ಇದ್ದೇ ಇರುತ್ತದೆ. ಅವರಿವರೊಂದಿಗೆ ಮಾತನಾಡುವಾಗ ನುಸುಳಿ ಬಂದು ಕಣ್ಣಾಲಿಗಳು ತೇವಗೊಳ್ಳಬಹುದು. ಕೆಲವೊಮ್ಮೆ ಏಕಾಂತದಲ್ಲಿ ಅಥವಾ ಸ್ವಗತದ ರೂಪದಲ್ಲಿ ‘ನನ್ನ ತಂದೆ ತಾಯಿಯನ್ನು ಇನ್ನೂ ಚೆನ್ನಾಗಿ ನೋಡಿಕೊಳ್ಳಬೇಕಿತ್ತು’ ಎಂತಲೋ ‘ಸರಿಯಾಗಿ ನೋಡಿಕೊಳ್ಳಲಾಗಲಿಲ್ಲ’ ಎಂದೋ ಪಶ್ಚಾತ್ತಾಪವಾಗ
ಬಹುದು. ಹೀಗೆ ಹತ್ತು ಹಲವು ರೂಪಗಳಲ್ಲಿ ಪಿತೃಗಳ ಸ್ಮರಣೆ ಅತ್ಯಂತ ನೈಜವಾಗಿ ಆಗುತ್ತಲೇ ಇರುತ್ತದೆ. ಆದರೆ ಈ ಪಕ್ಷ, ತರ್ಪಣೆ, ಶ್ರಾದ್ಧದಂತಹ ಆಚರಣೆಗಳು ಕೇವಲ ಯಾಂತ್ರಿಕವಾಗಿ, ಭ್ರಮಾತ್ಮಕವಾಗಿ ಮತ್ತು ಕೆಲವು ವೇಳೆ ತೋರಿಕೆಯಾಗಿ ಬಾಲಿಶ ಎಂದೆನಿಸುವುದಿಲ್ಲವೇ?