ಹೀಗೆ ಮಾತು ಢಾಳಾಗಿ, ಮೌನ ಮರೆಯಾಗಿ, ಚರ್ಚೆ ಬೊಬ್ಬೆಯಾಗಿ ಮಾರ್ಪಡುತ್ತಿರುವ ಈ ಕಾಲಕ್ಕೆ, ಡಿ.ವಿ.ಜಿ. ಅವರ ಕಗ್ಗದ ‘ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ’ ಎಂಬ ಉಕ್ತಿಗಳು ದಾರಿ ತೋರಬೇಕಿದೆ. ನಮ್ಮ ಮನೆಗಳಲ್ಲಿ, ಶಾಲೆಗಳಲ್ಲಿ, ಪತ್ರಿಕೆ- ಸುದ್ದಿ ವಾಹಿನಿ, ಕಡೆಗೆ ಸಂಸತ್ತಿನಲ್ಲಿ ಮುಕ್ತ ಮತ್ತು ವಿವೇಕಯುತಚರ್ಚೆಗಳು ನಡೆದು ಮಾತಿಗೊಂದು ಅರ್ಥ ದೊರಕಬೇಕಿದೆ.