ಸರಿ, ಆದರೆ ಹಾಗೆಂದು ನಮ್ಮ ಶಾಲೆಗಳಲ್ಲಿ ನೈತಿಕ ಶಿಕ್ಷಣ ನೀಡುವ ನೈತಿಕ ಹಕ್ಕು ಸರ್ಕಾರಕ್ಕೆ ಇಲ್ಲವೆಂದು ಭಾವಿಸಿ, ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವುದನ್ನೇ ನಿರಾಕರಿಸುವುದು ಸರಿಯಲ್ಲ. ಸರ್ಕಾರ ಭ್ರಷ್ಟವಾಗಿರುವುದು ನಿಜ. ಆದರೆ ಶಾಲೆಯಲ್ಲಿ ಕಲಿಯುತ್ತಿರುವ ಭಾವಿ ಪ್ರಜೆಗಳು ನಮ್ಮ ಮಕ್ಕಳೇ ಅಲ್ಲವೆ?! ಅವರಿಗೆ ನೈತಿಕ ಶಿಕ್ಷಣ ನೀಡಿ ಉತ್ತಮ ಪ್ರಜೆಗಳನ್ನಾಗಿಸುವ ಹೊಣೆ ನಮ್ಮ ಶಾಲೆಗಳ ಮೇಲಿದೆ. ಆದ್ದರಿಂದ ನಮ್ಮ ಜನಪದ ಕಥೆಗಳು, ಪರಿಸರ ಸಂರಕ್ಷಣಾ ಮಾಹಿತಿ ನೀಡುವ ಕಥೆಗಳು, ದೇಶಭಕ್ತರ ಕಥೆಗಳನ್ನು ಒಳಗೊಂಡ ನೈತಿಕ ಶಿಕ್ಷಣದ ಅಗತ್ಯ ಇಂದು ತುರ್ತಾಗಿ ಆಗಬೇಕಿದೆ.