ಇಂತಹ ಜೀವವಿರೋಧಿ ಪದ್ಧತಿಯನ್ನು ಇನ್ನೂ ಹೋಗಲಾಡಿಸಲಾಗದ ನಮ್ಮ ಆಡಳಿತ ವ್ಯವಸ್ಥೆಗೆ ತಾರತಮ್ಯರಹಿತ ಸಮಸಮಾಜ ನಿರ್ಮಿಸಲು, ವ್ಯಕ್ತಿಯ ಹಕ್ಕು ಮತ್ತು ಘನತೆ ರಕ್ಷಿಸಲು ಸಾಧ್ಯವೇ? ಇಂತಹದೊಂದು ಪ್ರಸಂಗ ಬಯಲಾದಾಗ ತೋರಿಕೆಯ ಕ್ರಮ ಕೈಗೊಳ್ಳುವುದರಿಂದ ಜೀತಪದ್ಧತಿಯ ನಿರ್ಮೂಲನೆ ಸಾಧ್ಯವಿಲ್ಲ. ಅದಕ್ಕೆ ಇಚ್ಛಾಶಕ್ತಿ ಮತ್ತು ಬದ್ಧತೆ ಬೇಕು. ಸರ್ಕಾರ ಈಗಲಾದರೂ ಅದನ್ನು ಪ್ರದರ್ಶಿಸಲಿ.