ಪಂಜಿನ ಕವಾಯತು, ದಸರಾ ಮೆರವಣಿಗೆ ಮುಂತಾದ ಕಾರ್ಯಕ್ರಮಗಳಿಗಾಗಿ ಸರ್ಕಾರ ಭಾರಿ ಪ್ರಮಾಣದಲ್ಲಿ ಹಣ ಖರ್ಚು ಮಾಡುತ್ತದೆ. ಅದನ್ನು ಹತ್ತಿರದಿಂದ ನೋಡುವ ಅವಕಾಶ ನಮ್ಮಂಥ ಜನಸಾಮಾನ್ಯರಿಗೆ ಯಾಕಿಲ್ಲ? ಇವಕ್ಕೆಲ್ಲ ‘ಪಾಸ್’ ಎಂಬ ವ್ಯವಸ್ಥೆ ರೂಪಿಸಿದ್ದೇನೋ ಆಯಿತು, ಅವೆಲ್ಲವೂ ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ಮತ್ತು ಅವರ ಪರಿವಾರದವರ ಕೈ ಸೇರುವುದರಿಂದ ಸಾರ್ವಜನಿಕರು ಎಲ್ಲೋ ಒಂದು ಮೂಲೆಯಲ್ಲಿ ಮುದುಡಿ ಕುಳಿತು ಕಾರ್ಯಕ್ರಮ ನೋಡಬೇಕಾದ ಸ್ಥಿತಿ ಇದೆ.