ದೇಶದಲ್ಲಿ ಬಿಜೆಪಿ ನೇತೃತ್ವದಲ್ಲಿ ಮತ್ತೊಮ್ಮೆ ಸರ್ಕಾರ ರಚನೆಯಾಗಲಿದೆ. ಆದರೆ, ಈ ಪಕ್ಷದ ಬಹುತೇಕ ಅಭ್ಯರ್ಥಿಗಳು ತಾವು ಕ್ಷೇತ್ರದಲ್ಲಿ ಮಾಡಿದ ಜನಸೇವಾ ಕಾರ್ಯಗಳನ್ನು ಮುಂದಿಟ್ಟು ಮತ ಯಾಚಿಸಲಿಲ್ಲ. ಬದಲಿಗೆ, ‘ನರೇಂದ್ರ ಮೋದಿಯವರನ್ನು ನೋಡಿ ನನಗೆ ಮತ ನೀಡಿ’ ಎಂದು ಕೇಳಿಕೊಂಡಿದ್ದರು.
ಮತದಾರರು ಇದಕ್ಕೆ ಸಮ್ಮತಿ ನೀಡಿದಂತೆ ಕಾಣಿಸುತ್ತಿದೆ. ಈ ವಿದ್ಯಮಾನ ಗಮನಿಸಿದರೆ, ನಮ್ಮ ಪ್ರಜಾಪ್ರಭುತ್ವ ಏಕವ್ಯಕ್ತಿ ಆರಾಧನೆ ಕಡೆ ಸಾಗುತ್ತಿದೆ ಎಂಬ ಅನುಮಾನ ಮೂಡುತ್ತದೆ. ನಮ್ಮನ್ನು ಆಳುವ ನಾಯಕನಷ್ಟೇ ಉತ್ತಮನಾಗಿದ್ದರೆ ಸಾಲದು, ಪ್ರತಿನಿಧಿಸುವವರೂ ಉತ್ತಮರಾಗಿ ಇರಬೇಕು.