‘ಇದ್ದ ಮಕ್ಕಳಿಗೆ ಹೊಟ್ಟೆಗಿಲ್ಲ… ಇನ್ನೊಂದು ಕೊಡು ಸದಾಶಿವ’– ಇದು ಕನ್ನಡದ ಹಳೆಯ ಮತ್ತು ಅರ್ಥಪೂರ್ಣ ಗಾದೆ. ಸಕಲ ಸೌಲಭ್ಯ ಇರುವ ನವ ಬೆಂಗಳೂರನ್ನು ನಿರ್ಮಿಸಲು ನೀಲನಕ್ಷೆ ಸಿದ್ಧಪಡಿಸಲಾಗುತ್ತಿದ್ದು, ವಿಶೇಷ ಅನುದಾನವನ್ನು ಸರ್ಕಾರ ಒದಗಿಸಲಿದೆ ಎನ್ನುವ ಮುಖ್ಯಮಂತ್ರಿಯವರ ಹೇಳಿಕೆ ಈ ಗಾದೆಯನ್ನು ಬೇಡವೆಂದರೂ ನೆನಪಿಸುತ್ತದೆ. ಬೆಂಗಳೂರಿಗೆ ಬೇಕಾಗಿರುವುದು ನಿರಂತರ ವಿದ್ಯುತ್ ಪೂರೈಕೆ, ಸ್ವಚ್ಛ ಗಟಾರ, ಹೂಳೆತ್ತಿದ– ಒತ್ತುವರಿ ಇಲ್ಲದ ರಾಜಕಾಲುವೆ, ಗುಂಡಿಮುಕ್ತ ರಸ್ತೆಗಳು, ಕಸ- ತ್ಯಾಜ್ಯರಹಿತ ಬಡಾವಣೆಗಳು, ಅಗೆತ ಇಲ್ಲದ ರಸ್ತೆಗಳು, ನಿರಂತರ ನೀರು ಪೂರೈಕೆ ವಿನಾ ಸಿಂಗಪುರವನ್ನು ಅನಾವರಣಗೊಳಿಸುವ ನವ ಬೆಂಗಳೂರಲ್ಲ.