ಇಂದು (ಫೆ. 1) ಕೇಂದ್ರ ಸರ್ಕಾರದ ಬಜೆಟ್ ಮಂಡನೆಯಾಗಲಿದೆ. ಕೊರೊನಾ ವೈರಸ್ನಿಂದ ಪಾತಾಳಕ್ಕಿಳಿದ ದೇಶದ ಅರ್ಥವ್ಯವಸ್ಥೆಗೆ ಈ ಬಜೆಟ್ ಹೇಗೆ ಸಹಾಯಕವಾಗಲಿದೆ ಎನ್ನುವ ನಿರೀಕ್ಷೆಯಲ್ಲಿ ದೇಶದ ಜನರಿದ್ದಾರೆ.
ಈಗಾಗಲೇ ಆರ್ಥಿಕ ಸಂಕಷ್ಟ ಎದುರಿಸಿದ, ಎದುರಿಸುತ್ತಿರುವ ವಲಯಗಳಿಗೆ ಸರ್ಕಾರ ಹೊಸ ತೆರಿಗೆ ವಿಧಿಸಿದರೆ ಅದು ‘ಸುಟ್ಟ ಗಾಯದ ಮೇಲೆ ಬರೆ ಎಳೆದಂತೆ’ ಆಗಬಹುದು. ಹೀಗಾಗಿ, ದೇಶದಲ್ಲಿ ಸರಕು- ಸೇವೆಗಳ ಉತ್ಪಾದನೆಹೆಚ್ಚಿಸುವುದರೊಂದಿಗೆ, ಉದ್ಯೋಗಾವಕಾಶಗಳ ಸೃಷ್ಟಿಗೆ ಕೇಂದ್ರ ಬಜೆಟ್ ಗಮನ ನೀಡಬೇಕಾಗಿದೆ.
ಏಕೆಂದರೆ, ದುಡಿಯುವ ಕೈಗಳಿಗೆ ಕೆಲಸ ಇದ್ದಾಗ, ಅವರ ಆದಾಯ ಹೆಚ್ಚುವುದರೊಂದಿಗೆ ಅನುಭೋಗವೂ ಹೆಚ್ಚುತ್ತದೆ. ಇದರಿಂದ ಆರ್ಥಿಕ ಚಟುವಟಿಕೆಗೆ ನೆರವಾಗುತ್ತದೆ. ಹೀಗಾಗಿ ಕೇಂದ್ರ ಬಜೆಟ್ನ ಗಮನ ಹೊಸ ತೆರಿಗೆ ವಿಧಿಸುವುದರ ಬದಲು ಬೇಡಿಕೆ ಹೆಚ್ಚಿಸುವತ್ತ ಇರಲಿ.