ಇಂತಹ ನಿಯಮದಿಂದ ಅನೇಕ ಬಡವರಿಗೆ ಆರೋಗ್ಯ, ಶಿಕ್ಷಣ, ಆಸ್ಪತ್ರೆ ಮತ್ತಿತರ ಸರ್ಕಾರಿ ಸೇವಾ ಸೌಲಭ್ಯ ಪಡೆಯಲು ತೊಂದರೆಯಾಗುತ್ತಿದೆ. ಈ ಅವೈಜ್ಞಾನಿಕ ನಿಯಮವನ್ನು ರದ್ದುಪಡಿಸಬೇಕು. ನೋಟರಿ ಅಥವಾ ಗ್ರಾಮ ಲೆಕ್ಕಾಧಿಕಾರಿಯ ದೃಢೀಕರಣ ಪತ್ರವನ್ನು ಮಾನ್ಯ ಮಾಡುವ ಮೂಲಕ ಆಧಾರ್ ಕಾರ್ಡ್ ತಿದ್ದುಪಡಿ ಪ್ರಕ್ರಿಯೆಯನ್ನು ಸರಳಗೊಳಿಸಬೇಕು.