ಗಲ್ಲು ಶಿಕ್ಷೆಗೆ ಒಳಗಾಗುವ ಮುನ್ನ ‘ಈಡೇರಿಸಲು ಸಾಧ್ಯವಾಗುವ ಆಸೆಯೇನಾದರೂ ಇದೆಯೇ’ ಎಂದು ಅಪರಾಧಿಗಳನ್ನು ಕೇಳುವುದು ವಾಡಿಕೆ. ಈ ಸಂದರ್ಭದಲ್ಲಿ, ಶಿಕ್ಷೆಯ ಬಳಿಕ ತಮ್ಮ ಅಂಗಾಂಗಗಳನ್ನು ದಾನ ಮಾಡುವ ಇಚ್ಛೆ ಅವರಿಗಿದೆಯೇ ಎಂದು ಸಹ ತಿಳಿದುಕೊಳ್ಳುವುದು ಉಚಿತ.
ಇದರಿಂದ ಕೆಲವು ಅಂಗವಿಕಲರಿಗಾದರೂ ಬದುಕು ಸಿಗಬಹುದು. ಇದಕ್ಕೆ ಅಪರಾಧಿಗಳ ಪೂರ್ಣ ಸಮ್ಮತಿ ಅವಶ್ಯ. ಈ ನಿಟ್ಟಿನಲ್ಲಿ ಕಾನೂನು ತಜ್ಞರು ಯೋಚಿಸಿ ನಿಯಮಗಳನ್ನು ರೂಪಿಸಬೇಕು.