ಫೋನ್ ಕದ್ದಾಲಿಕೆಯು ಅಕ್ಷಮ್ಯ. ಹಿಂದೆ ಇಂತಹ ಆರೋಪ ಬಂದಾಗ, ಆಗ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮಾದರಿಯಾದರು. ಈ ಬಗೆಯ ಆರೋಪ ಹೊತ್ತ ವ್ಯಕ್ತಿ ಕ್ಷಣಕಾಲವೂ ಅಧಿಕಾರದಲ್ಲಿ ಇರಬಾರದು ಎನ್ನುವುದು ಅವರ ನಿಲುವಾಗಿತ್ತು. ಇದೀಗ ಬೇರೊಂದು ಫೋನ್ ಕದ್ದಾಲಿಕೆ ಪ್ರಕರಣ ಬೆಳಕು ಕಂಡಿದೆ. ಜನಸಾಮಾನ್ಯರು ಸತ್ಯ ತಿಳಿಯಲು ಕಾತರರಾಗಿದ್ದಾರೆ.