ಏಕಬಳಕೆ ಪ್ಲಾಸ್ಟಿಕ್ ಅನ್ನು ಜುಲೈ 1ರಿಂದ ನಿಷೇಧಿಸಿ ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿದೆ. ಮುಂದಾದರೂ ಪ್ಲಾಸ್ಟಿಕ್ ಭೂತ ಹಾಗೇ ನಿಧಾನಗತಿಯಲ್ಲಿ ನಮ್ಮ ಪರಿಸರದಿಂದ ದೂರವಾಗಲಿ ಎಂದು ಆಶಿಸುತ್ತಾ ಎಲ್ಲರೂ ಈ ದಿಸೆಯಲ್ಲಿ ಕೈಜೋಡಿಸೋಣ. ಆದರೆ ಬಹಳ ಮುಖ್ಯವಾಗಿ, ಸರ್ಕಾರ ತೊಟ್ಟಿಲನ್ನೂ ತೂಗುವ ಮಗುವನ್ನೂ ಚಿವುಟುವ ಕೆಲಸ ಮಾಡಬಾರದು. ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದರಷ್ಟೇ ಸಾಲದು, ಆ ಪ್ಲಾಸ್ಟಿಕ್ ತಯಾರಿಕಾ ಕಾರ್ಖಾನೆಗಳನ್ನೂ ಮುಚ್ಚಿಸಬೇಕು. ಇಲ್ಲವಾದಲ್ಲಿ ವ್ಯಾಪಾರಿಗಳೇ ಬಲಿಪಶುಗಳು. ಸಾವಿರಾರು ರೂಪಾಯಿಯ ದಂಡವನ್ನು ಅವರು ತೆರಬೇಕಾಗುತ್ತದೆ. ಇದು ಹೀಗೇ ಮುಂದುವರಿದಲ್ಲಿ ಈ ಪ್ಲಾಸ್ಟಿಕ್ ನಿಷೇಧದ ಸುತ್ತೋಲೆಯೇ ದಂಡ ಎನಿಸುತ್ತದೆ.