ಬೀದರ್ ಜಿಲ್ಲೆಯಲ್ಲಿ ಕುಟುಂಬಗಳ ಸಂಖ್ಯೆಗಿಂತ ಪಡಿತರ ಕಾರ್ಡ್ಗಳ ಸಂಖ್ಯೆಯೇ ಹೆಚ್ಚಾಗಿದೆ ಎಂಬ ವರದಿಯಲ್ಲಿ (ಪ್ರ.ವಾ., ಅ. 17) ಆಶ್ಚರ್ಯಪಡುವಂತಹದ್ದು ಏನೂ ಇಲ್ಲ! ಏಕೆಂದರೆ ಪಡಿತರ ಚೀಟಿಯ ಬಹುದೊಡ್ಡ ಸಮಸ್ಯೆ ರಾಜ್ಯದಾದ್ಯಂತ ಇದೆ. ನಮ್ಮ ಸರ್ಕಾರಗಳು ದೊಡ್ಡ ಯೋಜನೆಗಳನ್ನು ಜಾರಿಗೆ ತರುವಲ್ಲಿ ತೋರುವ ಮುತುವರ್ಜಿಯನ್ನು ಆ ಯೋಜನೆಗಳು ಹಳ್ಳ ಹಿಡಿದರೆ ಅವುಗಳನ್ನು ಸರಿದಾರಿಗೆ ತರುವ ವಿಚಾರದಲ್ಲಿ ತೋರುವುದಿಲ್ಲ. ರಾಜ್ಯದಲ್ಲಿ ಎಷ್ಟೋ ಜನ ಒಂದು ಹೊತ್ತಿನ ಊಟಕ್ಕಾಗಿ ಪರಿತಪಿಸುವ ಸ್ಥಿತಿ ಇದೆ. ಇಂತಹ ಜನರಿಗೆ ಆಸರೆಯಾಗುವ ಪಡಿತರ ಯೋಜನೆ ಒಂದು ವರವೇ ಸರಿ.