ನಮ್ಮ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರಿಗೆ ಇಂದಿಗೆ ನಲವತ್ತೈದು ಮುಗಿದು ನಲವತ್ತಾರು ವರ್ಷ. ಹುಟ್ಟುಹಬ್ಬದ ಮುನ್ನಾದಿನ ಅವರು ಅಂತರ್ಮುಖಿ.
ಕನ್ನಡ ಜನಪದದ ಸುಖ ಸಂತೋಷಕ್ಕಾಗಿ ದುಡಿವ ದೀಕ್ಷೆ. ಹಿರಿಯರು, ಚಾಣಾಕ್ಷರು, ಮೇಧಾವಿಗಳು ಇದ್ದರೂ ತಮಗೆ ಸಂದ ಅವಕಾಶ ಸಾರ್ಥಕಗೊಳಿಸಬೇಕೆಂಬ ಸಂಕಲ್ಪ.
ಒಂಬತ್ತು ತಿಂಗಳು ಮುಖ್ಯಮಂತ್ರಿ ಪದಕ್ಕೆ ಅಲ್ಪಸಮಯ. ಕಳಕಳಿಯ ಪ್ರಯತ್ನಕ್ಕೆ ನಾಂದಿ. ಹರಿದು ಹಂಚಿ ಹೋಗಿದ್ದ ಕನ್ನಡ ನಾಡು ಒಂದಾಗಿರುವ ಈಗ ಶುದ್ಧ ಆಡಳಿತ ತೊಟ್ಟ ಪಣ. ಅದಕ್ಕೆ ಯಕ್ಷಿಣೀದಂಡ ಯಾವುದೂ ಇಲ್ಲ ಎಂಬ ಅರಿವು.
ಅಪೊಲೊ–9 ಯಾನ ಸೋಮವಾರಕ್ಕೆ
ಕೇಪ್ ಕೆನಡಿ, ಫೆ. 27– ಇಂದು ಪ್ರಾರಂಭವಾಗಬೇಕಾಗಿದ್ದ ಅಪೊಲೊ –9 ಬಾಹ್ಯಾಕಾಶ ನೌಕೆ ಯಾನವನ್ನು ಮೂವರು ಗಗನ ಗಾಮಿಗಳಿಗೂ ನೆಗಡಿಯಾಗಿರುವುದರಿಂದ ಸೋಮವಾರಕ್ಕೆ ಮುಂದೂಡಲಾಗಿದೆ.