ಶಾಸಕರ ವಿಐಪಿ ಸಂಸ್ಕೃತಿ ಕುರಿತ ಸಂಪಾದಕೀಯ (ಪ್ರ.ವಾ., ಸೆ. 26) ಸಕಾಲಿಕ. ಹಿಂದೆ ಶಿವರಾಮ ಕಾರಂತರು ಬರೆದಿದ್ದ ಈ ವಾಕ್ಯ ಗಮನಾರ್ಹ: ‘ಬ್ರಿಟಿಷರು ಇಲ್ಲಿಂದ ಹೋಗುವಾಗ ಇಲ್ಲಿ ಸುಮಾರು ಐನೂರು ಮಂದಿ ತುಂಡರಸರು ಆಳುತ್ತಿದ್ದರು. ಆ ತುಂಡರಸರ ಜಾಗದಲ್ಲಿ ಅವರ ಹತ್ತು ಪಟ್ಟು ಸಂಖ್ಯೆಯಲ್ಲಿ ಜನಪ್ರತಿನಿಧಿಗಳನ್ನು ಆರಿಸಿ ಅವರಿಗೆ ತುಂಡರಸರ ಪಟ್ಟವನ್ನು ಕಟ್ಟಿದೆವು’. ಇದೇ ಅರ್ಥ ಬರುವ ಮಾತುಗಳನ್ನು ದಿವಂಗತರಾದ ಬೀಚಿ ಮತ್ತು ಸಂತೋಷಕುಮಾರ ಗುಲ್ವಾಡಿ ಸಹ ಬರೆದಿದ್ದಾರೆ.