ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಲೆಕ್ಕಶಾಸ್ತ್ರ ವಿಷಯದ ಮೌಲ್ಯಮಾಪನವು ಮಾರ್ಚ್ 25ರಿಂದ ಏಪ್ರಿಲ್ 9ರವರೆಗೆ ಬೆಂಗಳೂರಿನಲ್ಲಿ ನಡೆದಿತ್ತು. ಆದರೆ ಮೌಲ್ಯಮಾಪನ ಮಾಡಿದ ಅನೇಕ ಉಪನ್ಯಾಸಕರ ಸಂಭಾವನೆಯು ಈವರೆಗೆ ಪಾವತಿಯಾಗಿಲ್ಲ. ಪಿಯು ಮಂಡಳಿಯ ಸಂಬಂಧಪಟ್ಟ ವಿಭಾಗಕ್ಕೆ ಹಲವುಬಾರಿ ದೂರವಾಣಿ ಕರೆ ಮಾಡಲಾಗಿದೆ. ಪತ್ರವನ್ನೂ ಕಳುಹಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು.