ಬೆಂಗಳೂರಿನ ಬೆಳವಣಿಗೆಯ ವೇಗಕ್ಕೆ ಯೋಜನಾಬದ್ಧವಾಗಿ ಕೆಲಸ ನಿರ್ವಹಿಸುವ ಆಡಳಿತಗಾರರ ಕೊರತೆಯಿದೆ. ದೀರ್ಘಾವಧಿಯ ಬಗ್ಗೆ ಯೋಚಿಸದೆ ಬರೀ ತೇಪೆ ಹಾಕುವ ಕೆಲಸಕ್ಕೆ ಸರ್ಕಾರ ಆದ್ಯತೆ ನೀಡುತ್ತಿದೆ. ರಾಜಕಾಲುವೆ ಅಭಿವೃದ್ಧಿಗಾಗಿ ₹1,556 ಕೋಟಿ ನೀಡುವುದಾಗಿ ಭರವಸೆ ನೀಡಿದ್ದ ಸರ್ಕಾರ, ಸದ್ಯಕ್ಕೆ ಈ ಉದ್ದೇಶಕ್ಕೆ ₹ 411.31 ಕೋಟಿಯನ್ನು ಮಾತ್ರ ಬಳಸಿಕೊಳ್ಳಲು ಸಿದ್ಧತೆ ನಡೆಸಿರುವುದು (ಪ್ರ.ವಾ., ಫೆ. 14) ದುರದೃಷ್ಟಕರ.