ಕಾಂಗ್ರೆಸ್, ರಾಷ್ಟ್ರ ಮಟ್ಟದಲ್ಲಿ ಬಲಿಷ್ಠ ಪಕ್ಷವಾಗಿ ಉಳಿಯುವುದು ದೇಶದ ಮೊದಲ ಅಗತ್ಯ. ತಾವಾಯಿತು ತಮ್ಮ ರಾಜ್ಯವಾಯಿತು ಎಂದುಕೊಂಡು ಸಂಕುಚಿತ ರಾಜಕಾರಣ ಮಾಡುವ ಚಂದ್ರಬಾಬು ನಾಯ್ಡು, ಮಮತಾ ಬ್ಯಾನರ್ಜಿ ಅವರಂತಹ ರಾಜ್ಯ ಮಟ್ಟದ ನಾಯಕರು ದೇಶದ ಹಿತಕ್ಕೆ ಎಂದೂ ಪೂರಕವಾಗಲಾರರು. ಒಕ್ಕೂಟ ವ್ಯವಸ್ಥೆಯಲ್ಲಿ ತಮ್ಮ ಬೆಂಬಲ ಆಧಾರಿತ ರಾಷ್ಟ್ರೀಯ ಪಕ್ಷವನ್ನು ತಮ್ಮ ಇಷ್ಟದಂತೆ ಆಡಿಸುವ ಹುನ್ನಾರ ಇವರದು. ಹೀಗಾಗಿ ಬಿಜೆಪಿಗೆ ಏನಿದ್ದರೂ ಕಾಂಗ್ರೆಸ್ ಮಾತ್ರ ಪರ್ಯಾಯ.