ಜೀವನದಲ್ಲಿ ಸೋಲು–ಗೆಲುವು ಪ್ರತಿಯೊಬ್ಬರಿಗೂ ಸಹಜ. ಈ ಸತ್ಯ ನಿಮಗೇಕೆ ಅರ್ಥವಾಗಲಿಲ್ಲ ಸಿದ್ಧಾರ್ಥ? ನಿಮ್ಮ ಕೈ ಹಿಡಿದ ಪತ್ನಿಯನ್ನು ನಡುನೀರಿನಲ್ಲಿ ಏಕೆ ಕೈಬಿಟ್ಟಿರಿ? ನಿಮ್ಮ ಮಕ್ಕಳನ್ನು, ನಿಮ್ಮ ಶ್ರಮದಿಂದಲೇ ಬದುಕು ಕಟ್ಟಿಕೊಂಡ ಸಾವಿರಾರು ಕುಟುಂಬಗಳನ್ನು ತಬ್ಬಲಿಗಳನ್ನಾಗಿ ಏಕೆ ಮಾಡಿದಿರಿ? ಹಿರಿಯ ಮುತ್ಸದ್ದಿ ಎಸ್.ಎಂ. ಕೃಷ್ಣ ಅವರ ಕಣ್ಣಲ್ಲಿ ಏಕೆ ನೋವಿನ ಕಂಬನಿ ಹರಿಸಿದಿರಿ? ನಿಮಗಿದ್ದ ಸಾಮರ್ಥ್ಯ ನೋಡಿದರೆ, ಎಲ್ಲಾ ಆಸ್ತಿ ಹೋದರೂ ಮತ್ತೆ ಮೇಲೆದ್ದು ಬಂದು, ಈ ದೇಶಕ್ಕೆ ಹಾಗೂ ಯುವಜನರಿಗೆ ಮಾದರಿಯಾಗಬಹುದಿತ್ತು ಅಲ್ಲವೇ? ನೀವು ಮಾಡಿದ್ದು ನ್ಯಾಯವೇ?
-ಸುಮನ ಹೊಂಬಾಳ್, ಮೈಸೂರು