ಆ ದಿನ ಅಲ್ಲಿನ ವಕೀಲರ ವರ್ತನೆಯನ್ನು ನೋಡಿದವರಿಗೆ ಅವರಲ್ಲಿ ಮಾನವೀಯ ಗುಣಗಳೇ ಇಲ್ಲವೇನೋ ಎನಿಸುವಂತಿತ್ತು. ಕಾರಣ ಏನೇ ಇರಲಿ, ಕರ್ತವ್ಯನಿರತ ಪೊಲೀಸರ ಮೇಲೆ ವಕೀಲರ ಗುಂಪೊಂದು ಏಕಾಏಕಿ ಮೃಗೀಯ ರೀತಿಯಲ್ಲಿ ದಾಳಿ ನಡೆಸಿತು. ಪೊಲೀಸರ ಮೇಲಿನ ಈ ಹಲ್ಲೆ ಖಂಡನೀಯ.
ವಕೀಲರು ಸಂಘಟಿತರಾಗಿ ಇಂಥ ಕೃತ್ಯಗಳನ್ನು ಎಸಗುವ ಪರಿಪಾಟ ಹೆಚ್ಚುತ್ತಿರುವುದು ಆತಂಕಕಾರಿ. ತಾವು ಏನೇ ಮಾಡಿದರೂ ಕಾನೂನಿನ ದಂಡದಿಂದ ತಪ್ಪಿಸಿಕೊಳ್ಳಬಹುದು ಎನ್ನುವ ಆಕ್ರಮಣಕಾರಿ ಮನೋಭಾವ ಇಂತಹ ದುಷ್ಕೃತ್ಯಕ್ಕೆ ಕಾರಣ.
ಮಾಧ್ಯಮಗಳು ಏಕೋ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಮಾನವ ಹಕ್ಕುಗಳ ಆಯೋಗವಾದರೂ ಈ ಬಗ್ಗೆ ಸ್ವಯಂಪ್ರೇರಿತ ವರದಿ ನೀಡುವ ಮೂಲಕ, ಸಂಘಟನೆಯಿಲ್ಲದ ಪೊಲೀಸರಿಗೆ ಮಾನಸಿಕ ಸ್ಥೈರ್ಯ ತುಂಬಲಿ.