ಇಂತಹ ಸಂದರ್ಭದಲ್ಲಿ ಸರ್ಕಾರ ಒಂದಿಷ್ಟು ಸಂಬಳ ಹೆಚ್ಚು ಮಾಡಿ ಅವರನ್ನು ಸಮಾಧಾನಪಡಿಸುವುದು ರೂಢಿಯಲ್ಲಿದೆ. ಸರ್ಕಾರದ ಈ ಧೋರಣೆಯಿಂದಾಗಿ ಉದ್ಯೋಗ ಆಕಾಂಕ್ಷಿ ಅಭ್ಯರ್ಥಿಗಳ ಪಾಲಿಗೆ ಸರ್ಕಾರಿ ಕೆಲಸಗಳು ಗಗನಕುಸುಮ ಆಗುತ್ತಿವೆ. ಮತ್ತೊಂದೆಡೆ, ಕೆಲಸವಿದ್ದೂ ಉದ್ಯೋಗ ಭದ್ರತೆ ಇಲ್ಲದೆ ಗುತ್ತಿಗೆ ನೌಕರರು ಪರದಾಡುವಂತಾಗಿದೆ. ಹೀಗೆ ಎರಡೂ ವರ್ಗದವರ ಬದುಕು ಅತಂತ್ರವಾಗಿದೆ.
–ಸುನೀಲ್ ಟಿ.ಪಿ., ತಳಗವಾದಿ, ಮಳವಳ್ಳಿ