ಈಚೆಗೆ ನಿಧನರಾದ ಚಿತ್ರನಟ ರಾಜೇಶ್ ಅವರನ್ನು ನೆನೆದಾಗಲೆಲ್ಲ ‘ನಮ್ಮ ಊರು’ ಸಿನಿಮಾದ ‘ಹೋಗದಿರಿ ಸೋದರರೇ...’ ಎಂಬ ಹಾಡು ನೆನಪಾಗುತ್ತದೆ. ಹಳ್ಳಿಯನ್ನು ತೊರೆದು ಪೇಟೆಗೆ ಹೊರಟ ಯುವಜನರನ್ನು ತಡೆಯಲೆತ್ನಿಸುವ ಈ ಹಾಡು ಇಂದಿಗೂ ತುಂಬ ಮನನೀಯವಾಗಿದೆ, ಪ್ರಸ್ತುತವಾಗಿದೆ. ಹಳ್ಳಿಯ ಬಾಳಿನ ಸೊಗಸು ಮತ್ತು ಸೌಹಾರ್ದವನ್ನು ನಿವೇದಿಸುವ ರಾಜೇಶ್ ಅವರ ಅಭಿನಯ ಮನನೀಯವಾಗಿದೆ. ‘ಬೆಳುವಲದ ಮಡಿಲಲ್ಲಿ’ ಎಂಬ ಅವರ ಸಿನಿಮಾ ಸಹ ರೈತರ ಪರಿ ಪರಿಯಾದ ಕಷ್ಟಗಳನ್ನು ನಿರೂಪಿಸಿದೆ. ಈ ಥರದ ನನ್ನ ತಲೆಮಾರಿನ ನೆನಪು ಗಳಿಗೆ ಸಾವೆಲ್ಲಿದೆ?