ಕಿಡಿಯನ್ನು ಉಪೇಕ್ಷಿಸಿದರೆ ಮನೆಯನ್ನೇ ಸುಟ್ಟೀತು ಎಂಬ ಮಾತಿದೆ. ಅದರಂತೆ ಸಣ್ಣ ಪುಟ್ಟ ಮಾತುಗಳು ಬೆಳೆಯುತ್ತಿರುವ ಭಾರತವನ್ನು ಹಿಂದಕ್ಕೆ ಒಯ್ಯುತ್ತವೆ. ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುವ ನುಡಿ ಭಯೋತ್ಪಾದನೆ ಬೀದಿಗಳಲ್ಲೂ ಕೇಳಿಸುವಂತೆ ಆಗಬಾರದು. ನಮ್ಮ ಯುವಕರು ಸಂವಿಧಾನದ ಮೇಲೆ ನಂಬಿಕೆ ಇರಿಸಬೇಕು. ತಪ್ಪು ಮಾಡಿದವರು ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳಲಾಗದು. ಕಾನೂನನ್ನು ಕೈಗೆ ತೆಗೆದುಕೊಳ್ಳುವ ಕೆಲಸ ಮಾಡಬಾರದು. ಸರ್ವಧರ್ಮ ಸಮನ್ವಯ, ಸಹಕಾರ, ಸಂಯಮ, ಸಹಬಾಳ್ವೆ ಇಂದು ಮುಂದು ಎಂದೆಂದೂ ಅನಿವಾರ್ಯ.
-ತಿರುಪತಿ ನಾಯಕ್,ಹೊಸನಗರ