ಲಂಚ ಪೀಕುವ ಒಂದೇ ಉದ್ದೇಶದಿಂದ ಸರ್ಕಾರಿ ನೌಕರರು ಜನಸಾಮಾನ್ಯರಿಗೆ ಕಿರಿಕಿರಿ ಉಂಟುಮಾಡುತ್ತಿದ್ದಾರೆ. ಬಡವರು, ಮಹಿಳೆಯರು, ವಯೋವೃದ್ಧರು ಎಂಬ ಭೇದವಿಲ್ಲದೆ ಎಲ್ಲರನ್ನೂ ಪೀಡಿಸುತ್ತಾರೆ. ಬಹಿರಂಗವಾಗಿಯೇ ಲಂಚ ಕೇಳುತ್ತಾರೆ. ಅಂಥವರ ಲಜ್ಜೆ
ಗೇಡಿ ವರ್ತನೆಗೆ ಬಿಸಿ ತಾಕಿಸುವ ಬದಲು ಅಸಹಾಯಕ ಜನರ ವಿರುದ್ಧ ಕಾನೂನು ಅಸ್ತ್ರ ಪ್ರಯೋಗಿಸಲು ಹೊರಟಿರುವುದು ಒಪ್ಪತಕ್ಕ ವಿಷಯವಲ್ಲ.