‘ಬ್ಯಾಂಕಿಂಗ್ ನೇಮಕಾತಿಯಲ್ಲಿ ಸ್ಥಳೀಯರಿಗೆ ಅನ್ಯಾಯ’ (ವಾ.ವಾ., ಜ. 8) ಎಂಬ ಪತ್ರದಲ್ಲಿ ವಿಕಾಸ್ ಹೆಗಡೆ ಅವರು ಬ್ಯಾಂಕಿಂಗ್ ನೇಮಕಾತಿಯಲ್ಲಿ ಸ್ಥಳೀಯರಿಗೆ ಆಗುತ್ತಿರುವ ಅನ್ಯಾಯದ ವಾಸ್ತವ ಚಿತ್ರಣ ಕೊಟ್ಟಿದ್ದಾರೆ. ತಮ್ಮದೇ ನಾಡಿನಲ್ಲಿ ಕನ್ನಡಿಗರಿಗೆ ಇಂಥ ಸ್ಥಿತಿ ಬರಲು ಕನ್ನಡಿಗರ ನಿರ್ಲಕ್ಷ್ಯ, ಬ್ಯಾಂಕ್ ಉದ್ಯೋಗದ ಬಗ್ಗೆ ಇರುವ ಕೀಳರಿಮೆಗಳೂ ಕಾರಣ. ನಮ್ಮ ಮಕ್ಕಳು ವೈದ್ಯ ಅಥವಾ ಎಂಜಿನಿಯರ್ ಆಗಬೇಕು, ವಿದೇಶದಲ್ಲಿ ಕೆಲಸ ಮಾಡಿ ಲಕ್ಷ ಲಕ್ಷ ಗಳಿಸಬೇಕು ಎಂಬುದು ನಮ್ಮ ಪಾಲಕರ ಕನಸೇ ವಿನಾ, ನಮ್ಮೂರಲ್ಲಿ ದುಡಿಯಬೇಕು ಎಂದು ಯಾರೂ ಬಯಸುವುದಿಲ್ಲ. ಇದರ ಲಾಭವನ್ನು ಹೊರರಾಜ್ಯದವರು ಪಡೆಯುತ್ತಿದ್ದಾರೆ.