ಆದಿವಾಸಿಗಳಿಗೆ ನೀಡುವ ಸವಲತ್ತುಗಳನ್ನು, ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದ ಬುಡಕಟ್ಟು ಜನರಿಗೆ ವಿತರಿಸಬಾರದು ಎಂಬ ಸಂಸದ ಪ್ರತಾಪ ಸಿಂಹ ಅವರ ಹೇಳಿಕೆ (ಪ್ರ.ವಾ., ಫೆ. 25) ಕ್ರೈಸ್ತ ಸಮುದಾಯದವರ ಮನ ನೋಯಿಸುವಂತಹದ್ದು. ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದುವವರನ್ನೇ ಗುರಿಯಾಗಿಸಿಕೊಂಡು ನೀಡಿರುವ ಈ ಹೇಳಿಕೆ ಸಂವಿಧಾನಕ್ಕೆ ವಿರುದ್ಧವಾಗಿದೆ. ಎಲ್ಲಾ ಜನಸಮುದಾಯದವರಿಂದ ಆಯ್ಕೆಗೊಂಡ ಸಂಸದರು ಸಂವಿಧಾನದ ಮೂಲ ಆಶಯವನ್ನೇ ಮರೆತಿರುವ ಹಾಗಿದೆ.