‘ಮಾನವ ಸಂಪನ್ಮೂಲ ಮತ್ತು ಸ್ತ್ರೀ ಸೌಖ್ಯ’ ಎಂಬ ಸತೀಶ್ ಜಿ.ಕೆ. ತೀರ್ಥಹಳ್ಳಿ ಅವರ ಲೇಖನ (ಸಂಗತ, ಜುಲೈ 11) ಅರ್ಥಪೂರ್ಣವಾದ ಚಂದದ ಬರಹವಾಗಿದ್ದು, ಹೆಣ್ಣುಮಕ್ಕಳ ಘನತೆಯನ್ನು ಸಾರುವಂತಿದೆ.
ಬದುಕಿನ ಮೌಲ್ಯಗಳಿಗಾಗಿ ಹೋರಾಡುತ್ತಿರುವ ಈ ಹೊತ್ತಿನಲ್ಲಿ ಸ್ತ್ರೀ ಸಮಾನತೆಯ ನಿಖರ ಅರಿವನ್ನು ನಮ್ಮ ಚಲನಶೀಲ ಯುವಜನರಿಗೆ ಅಗತ್ಯವಾಗಿ ನೀಡಬೇಕೆನಿಸುತ್ತದೆ.
ಧಾರ್ಮಿಕ ಕಾರಣಗಳನ್ನೊಡ್ಡಿ ಸ್ತ್ರೀಯರಿಗೆ ಅವಕಾಶಗಳನ್ನು ನಿರಾಕರಿಸುವುದು ಇನ್ನಾದರೂ ನಿಲ್ಲಲಿ. ಉಡುಗೆ ತೊಡುಗೆಗಳ ಸ್ವಾತಂತ್ರ್ಯ, ಸಭ್ಯತೆಯನ್ನು ನಿರ್ಧರಿಸುವ ಅವಕಾಶ ಅವಳಿಗೇ ಇರಲಿ. -ಪ್ರಿಯದರ್ಶಿನಿ, ಸುಮಾ ಶೇಖರ್,ಕೂಡಿಗೆ, ಸೋಮವಾರಪೇಟೆ