ಮಾಧ್ಯಮಗಳದ್ದು ಯಾವತ್ತೂ ಹದ್ದಿನ ಕಣ್ಣು. ಅವುಗಳ ಮಿಂಚಿನ ಕಾರ್ಯಾಚಾರಣೆಯಿಂದ ಅದೆಷ್ಟೋ ಸುದ್ದಿಗಳು, ಹಗರಣಗಳು ಬಯಲಿಗೆ ಬರುತ್ತವೆ. ಆದರೆ ಗಂಗಾ ನದಿಯ ಉಳಿವಿಗಾಗಿ ಉಪವಾಸ ಮಾಡಿ ಪ್ರಾಣತ್ಯಾಗ ಮಾಡಿದ ವ್ಯಕ್ತಿಯೊಬ್ಬರ ಬಗ್ಗೆ ಮಾಧ್ಯಮಗಳು, ವಿಶೇಷವಾಗಿ ದೃಶ್ಯ ಮಾಧ್ಯಮಗಳು ನಿರ್ಲಕ್ಷ್ಯ ತೋರಿದ್ದು ಬೇಸರದ ವಿಚಾರ.