ಸುದೀರ್ಘ ರಾಜಕೀಯ ಜೀವನದಲ್ಲಿ ಕರುಣಾನಿಧಿ ಅವರು ಕೆಲವು ತಪ್ಪು ಹೆಜ್ಜೆಗಳನ್ನೂ ಇಟ್ಟಿದ್ದರು. ಅವರುಅಧಿಕಾರದಲ್ಲಿದ್ದಾಗ ಎಲ್ಟಿಟಿಇಗೆ ಬೆಂಬಲ ಕೊಟ್ಟಿದ್ದರು. ಎಲ್ಟಿಟಿಇಯ ಕೆಲವು ನಾಯಕರು ಚೆನ್ನೈನ ಐಷಾರಾಮಿ
ಬಂಗಲೆಗಳಲ್ಲಿದ್ದರಂತೆ. ವಿಧಾನಸಭೆಯಲ್ಲೊಮ್ಮೆ ಜಯಲಲಿತಾ ಅವರನ್ನು ಹೀನಾಯವಾಗಿ ನಡೆಸಿಕೊಂಡದ್ದು ಅವರು ಮಾಡಿದ ಇನ್ನೊಂದು ತಪ್ಪು. ಮೀಸಲಾತಿಯಲ್ಲಿ ಆರ್ಥಿಕವಾಗಿ ಸಶಕ್ತರು (ಕ್ರೀಮಿ ಲೇಯರ್) ಎಂಬ ಕಲ್ಪನೆ
ಯನ್ನೇ ತರಬಾರದು ಎಂಬುದು ಅವರ ನಿಲುವಾಗಿತ್ತು.