ಈ ಎರಡನೆಯ ವರ್ಗದ ಜನರಿಗೆ ಗುಡಿ– ದೇವರು ಮತ್ತು ಅಲ್ಲಿನ ತೀರ್ಥ ಪ್ರಸಾದವೇ ಬಹಳ ಮುಖ್ಯ. ಬಸವಣ್ಣ ಹುಟ್ಟಿದ ಕನ್ನಡ ನಾಡಿನಲ್ಲಿ ಶ್ರಮ ಸಂಸ್ಕೃತಿಗೆ ಮೊದಲ ಆದ್ಯತೆ. ಇದು ಸಂವಿಧಾನದ ಆಶಯವೂ ಹೌದು. ಬಸವತತ್ವ ವನ್ನು ಮರೆತ ನಾವು, ಗುಡಿ ಸಂಸ್ಕೃತಿ ಕಡೆಗೆ ವಾಲುತ್ತಿದ್ದೇವೆ. ಇದಕ್ಕೆ ಪೂರಕವಾಗಿ ಸರ್ಕಾರವು ಮಹಿಳೆಯರಿಗೆ ಅರಿಸಿನ–ಕುಂಕುಮ, ಹಸಿರು ಬಳೆ ಕೊಟ್ಟು, ಅವರನ್ನು ಒಂದು ಚೌಕಟ್ಟಿಗೆ ಸೀಮಿತಗೊಳಿಸುವ ಕೆಲಸಕ್ಕೆ ಕೈಹಾಕಿದೆ. ಇದು ಮಹಿಳೆಯರಿಗೆ ಕೊಡುವ ಗೌರವ ಅಲ್ಲ, ಸಂವಿಧಾನದ ಆಶಯವೂ ಇದಲ್ಲ. ಹೊರಗಡೆ ಪುರುಷ ಸಮಾಜದ ಜೊತೆ ಮಹಿಳೆಯರು ಧೈರ್ಯದಿಂದ ಬದುಕಲು ಸಾಧ್ಯವಾಗುವಂಥ ಕಾರ್ಯಕ್ರಮಗಳನ್ನು ಸರ್ಕಾರ ಜಾರಿಗೆ ತರಲಿ.