ಸರ್ಕಾರಿ ಶಾಲೆಗಳು ಸಮವಸ್ತ್ರ, ಪಠ್ಯಪುಸ್ತಕ, ಶಿಕ್ಷಕರ ಕೊರತೆ ಹಾಗೂ ಕಟ್ಟಡ ನಿರ್ವಹಣೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿವೆ. ಅವುಗಳ ಬಗ್ಗೆ ಎಂದೂ ಚಕಾರ ಎತ್ತದ, ತಮ್ಮ ಮಕ್ಕಳು ಅಥವಾ ಬಂಧು– ಮಿತ್ರರ ಮಕ್ಕಳನ್ನೂ ಸರ್ಕಾರಿ ಶಾಲೆಗೆ ದಾಖಲಿಸದ ತೇಜಸ್ವಿನಿ ಅವರು, ಮಕ್ಕಳು ತಿನ್ನುವ ಮೊಟ್ಟೆಯ ಬಗ್ಗೆ ಪ್ರಶ್ನಿಸಿರುವುದು ವಿಷಾದನೀಯ.