ಇದೀಗ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಅಕ್ಷರಶಃ ಕಿತ್ತಾಟವಾಗಿ ಬಿಜೆಪಿಗೆ ಲಾಭವಾಗಿದೆ. ಈ ಕಾರಣಕ್ಕಾಗಿಯೇ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳೆರಡೂ ‘ಇವರು ಬಿಜೆಪಿಯ ಬಿ ಟೀಮ್’ ಎಂದು ಪರಸ್ಪರ ಕಚ್ಚಾಡುವಂತೆಯೂ ಆಗಿದೆ. ಈ ಕಚ್ಚಾಟ ಹಾಸ್ಯಾಸ್ಪದವಾಗಿದೆ. ಹೀಗಾಗಿ ಯಾರು ಬಿಜೆಪಿಯ ಬಿ ಟೀಮ್ ಎಂಬ ಬಗ್ಗೆ ರಾಜ್ಯದ ಮತದಾರರಲ್ಲಿ ಗೊಂದಲ ಉಂಟಾಗುತ್ತಿದೆ. ಈ ಗೊಂದಲ ಪರಿಹಾರವಾಗಿ ಒಂದು ಸ್ಪಷ್ಟತೆ ಜನರಿಗೆ ಲಭಿಸಬೇಕಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಆಯ್ಕೆಗೆ ಯಾರು ಸೂಕ್ತ ಎಂಬ ಪ್ರಶ್ನೆಗೆ ಮತದಾರರು ಇದೀಗ ಉತ್ತರ ಕಂಡುಕೊಳ್ಳುವ ಯತ್ನದಲ್ಲಿದ್ದಾರೆ. ಈ ಸಂಬಂಧ ಅವರಿಗೆ ಸ್ಪಷ್ಟತೆ ಲಭಿಸಬೇಕಿದೆ.
ನಿಲುವು ಮತ್ತು ಬದ್ಧತೆ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ದ್ವಂದ್ವ ನಿವಾರಿಸಿಕೊಳ್ಳದಿದ್ದರೆ ಮತ್ತೆ ಅತಂತ್ರ ಫಲಿತಾಂಶ ದೊರೆಯುವಂತಾಗುತ್ತದೆ. ಇದಾಗಬಾರದಲ್ಲವೇ?