ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಮತ್ತೆ ಬಾರದಿರಲಿ ಅತಂತ್ರ ಫಲಿತಾಂಶ

ಅಕ್ಷರ ಗಾತ್ರ

ಇದೀಗ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಅಕ್ಷರಶಃ ಕಿತ್ತಾಟವಾಗಿ ಬಿಜೆಪಿಗೆ ಲಾಭವಾಗಿದೆ. ಈ ಕಾರಣಕ್ಕಾಗಿಯೇ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳೆರಡೂ ‘ಇವರು ಬಿಜೆಪಿಯ ಬಿ ಟೀಮ್’ ಎಂದು ಪರಸ್ಪರ ಕಚ್ಚಾಡುವಂತೆಯೂ ಆಗಿದೆ. ಈ ಕಚ್ಚಾಟ ಹಾಸ್ಯಾಸ್ಪದವಾಗಿದೆ. ಹೀಗಾಗಿ ಯಾರು ಬಿಜೆಪಿಯ ಬಿ ಟೀಮ್ ಎಂಬ ಬಗ್ಗೆ ರಾಜ್ಯದ ಮತದಾರರಲ್ಲಿ ಗೊಂದಲ ಉಂಟಾಗುತ್ತಿದೆ. ಈ ಗೊಂದಲ ಪರಿಹಾರವಾಗಿ ಒಂದು ಸ್ಪಷ್ಟತೆ ಜನರಿಗೆ ಲಭಿಸಬೇಕಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಆಯ್ಕೆಗೆ ಯಾರು ಸೂಕ್ತ ಎಂಬ ಪ್ರಶ್ನೆಗೆ ಮತದಾರರು ಇದೀಗ ಉತ್ತರ ಕಂಡುಕೊಳ್ಳುವ ಯತ್ನದಲ್ಲಿದ್ದಾರೆ. ಈ ಸಂಬಂಧ ಅವರಿಗೆ ಸ್ಪಷ್ಟತೆ ಲಭಿಸಬೇಕಿದೆ.

ನಿಲುವು ಮತ್ತು ಬದ್ಧತೆ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ದ್ವಂದ್ವ ನಿವಾರಿಸಿಕೊಳ್ಳದಿದ್ದರೆ ಮತ್ತೆ ಅತಂತ್ರ ಫಲಿತಾಂಶ ದೊರೆಯುವಂತಾಗುತ್ತದೆ. ಇದಾಗಬಾರದಲ್ಲವೇ?

-ಹುರುಕಡ್ಲಿಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT