ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಹೀಗಿದ್ದಾರೆ ಭವಿಷ್ಯ ನಿರ್ಮಾತೃಗಳು!

ಅಕ್ಷರ ಗಾತ್ರ

ರಾಜ್ಯದಲ್ಲಿ ಇತ್ತೀಚೆಗೆ ವರದಿಯಾಗುತ್ತಿರುವ ಕೆಲವು ಶಿಕ್ಷಕರ ಭಯಾನಕ ಚರ್ಯೆಗಳು ಕಳವಳಕಾರಿ. ರಾಜಕೀಯ ಪಕ್ಷವೊಂದರ ಪರವಾಗಿ, ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಮತದಾರರಿಗೆ ಔತಣಕೂಟದ ಬಾಧ್ಯತೆಯನ್ನು ವಹಿಸಿದ್ದೆ. ಎಳವೆಯಲ್ಲಿ ಶರಾಬು ಗಡಂಗಿನ ಸುತ್ತ ನಾನು ಕಂಡಿದ್ದ ಕುಡುಕರಿಗಿಂತ ಹೀನವಾಗಿ ವರ್ತಿಸಿದ ನಾಳಿನ ಭವಿಷ್ಯ ನಿರ್ಮಾತೃಗಳ ಬಗ್ಗೆ ಭಯವಾಯಿತು. ಕೂಟ ಏರ್ಪಡಿಸಿದ ಪಾಪ ನಮ್ಮದೇ ಆದರೂ, ಭಾಗೀದಾರ ಮತದಾರ ಶಿಕ್ಷಕರ ಬೀಭತ್ಸವಂತೂ ಅಸದಳ.

ಕುವೆಂಪು, ಶಿವರುದ್ರಪ್ಪ, ಭೈರಪ್ಪ ರೀತಿಯ ಮೇಷ್ಟ್ರುಗಳು ಎಲ್ಲಿ? ಇಂದಿನ ಈ ಮೇಷ್ಟ್ರುಗಳು ಎಲ್ಲಿ?

ಕೆ.ಪುರುಷೋತ್ತಮ ರೆಡ್ಡಿ,ಪಾವಗಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT