ರಾಜ್ಯದಲ್ಲಿ ಇತ್ತೀಚೆಗೆ ವರದಿಯಾಗುತ್ತಿರುವ ಕೆಲವು ಶಿಕ್ಷಕರ ಭಯಾನಕ ಚರ್ಯೆಗಳು ಕಳವಳಕಾರಿ. ರಾಜಕೀಯ ಪಕ್ಷವೊಂದರ ಪರವಾಗಿ, ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಮತದಾರರಿಗೆ ಔತಣಕೂಟದ ಬಾಧ್ಯತೆಯನ್ನು ವಹಿಸಿದ್ದೆ. ಎಳವೆಯಲ್ಲಿ ಶರಾಬು ಗಡಂಗಿನ ಸುತ್ತ ನಾನು ಕಂಡಿದ್ದ ಕುಡುಕರಿಗಿಂತ ಹೀನವಾಗಿ ವರ್ತಿಸಿದ ನಾಳಿನ ಭವಿಷ್ಯ ನಿರ್ಮಾತೃಗಳ ಬಗ್ಗೆ ಭಯವಾಯಿತು. ಕೂಟ ಏರ್ಪಡಿಸಿದ ಪಾಪ ನಮ್ಮದೇ ಆದರೂ, ಭಾಗೀದಾರ ಮತದಾರ ಶಿಕ್ಷಕರ ಬೀಭತ್ಸವಂತೂ ಅಸದಳ.