ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಕನ್ಯೆಯರಿಗೆ ವರ್ಜ್ಯ ಈ ವರ!

ಅಕ್ಷರ ಗಾತ್ರ

ಭತ್ತದ ಕೃಷಿ ಅವನತಿಯತ್ತ ಸಾಗಿರುವುದರ ಬಗೆಗಿನ ವಸ್ತುಸ್ಥಿತಿಯನ್ನು ಸತೀಶ್ ಜಿ.ಕೆ. ತೀರ್ಥಹಳ್ಳಿ ತೆರೆದಿಟ್ಟಿದ್ದಾರೆ (ಸಂಗತ, ಆ. 14). ಹಿಂದೆ ಮಲೆನಾಡಿನಲ್ಲಿ ಭತ್ತ ಬೆಳೆಯುವುದು ಒಂದು ಆದರಣೀಯ ಉದ್ಯೋಗವಾಗಿತ್ತು. ಒಬ್ಬ ರೈತ ಜಾಸ್ತಿ ಭತ್ತ ಬೆಳೆಯುತ್ತಿದ್ದಾನೆಂದರೆ ಆತನಿಗೆ ತುಂಬಾ ಗೌರವ, ಮಾನ್ಯತೆ ಲಭಿಸುತ್ತಿದ್ದವು. ಆ ಊರಿಗೇ ಆತ ಒಬ್ಬ ದೊಡ್ಡ ಜನ ಅಂತ ಭಾವಿಸಲಾಗುತ್ತಿತ್ತು. ಒಬ್ಬ ವರನಿಗೆ ಹೆಣ್ಣು ಕೊಡಲು ಬರುವ ಕನ್ಯಾಪಿತೃಗಳು ಆ ಮನೆಯ ಕಣದಲ್ಲಿ ದೊಡ್ಡ ಭತ್ತದ ಕುತ್ತರೆ ಅಥವಾ ಹುಲ್ಲಿನ ಗೊಣವೆಗಳನ್ನು ನೋಡಿದರೆ, ಆ ವರನನ್ನು ಅಳಿಯನನ್ನಾಗಿ ಸ್ವೀಕರಿಸಲು ಆ ಒಂದು ಮಾನದಂಡವೇ ಸಾಕಾಗಿ ಬಿಡುತ್ತಿತ್ತು.

ಆದರೆ ಇಂದು ಪರಿಸ್ಥಿತಿ ಬಹಳ ಬದಲಾಗಿ ಹೋಗಿದೆ. ರೈತನನ್ನು ವರಿಸಲು ಹುಡುಗಿಯರೇ ಒಪ್ಪುತ್ತಿಲ್ಲ. ಅದರಲ್ಲೂ ಆತನೇನಾದರೂ ಭತ್ತ ಬೆಳೆಯುವ ಗದ್ದೆಯನ್ನು ಹೇರಳವಾಗಿ ಹೊಂದಿರುವವನೆಂದರೆ ಆ ಕಡೆ ತಲೆ ಹಾಕಿ ಕೂಡ ಮಲಗುವುದಿಲ್ಲ! ಭತ್ತದ ಕೃಷಿ ನಷ್ಟದಾಯಕ ಉದ್ಯೋಗ ಎಂದು ಭಾವಿಸಿ ಬಹುತೇಕ ರೈತರು ಭತ್ತ ಬೆಳೆಯುವ ಕಾಯಕದಿಂದ ದೂರ ಸರಿದು ಕೆಲವಾರು ವರ್ಷಗಳೇ ಕಳೆದಿವೆ. ಸರ್ಕಾರಗಳು ಎಚ್ಚೆತ್ತು, ಭತ್ತ ಬೆಳೆಯುವವರಿಗೆಪ್ರೋತ್ಸಾಹದಾಯಕ ಯೋಜನೆಗಳನ್ನು ಹಾಕಿಕೊಳ್ಳಬೇಕಾಗಿದೆ.

- ಚಾವಲ್ಮನೆ ಸುರೇಶ್ ನಾಯಕ್,ಹಾಲ್ಮತ್ತೂರು, ಕೊಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT