ಕೇಂದ್ರ ಸಚಿವರಾದ ನಂತರ ಮೊದಲ ಬಾರಿಗೆ ರಾಜ್ಯಕ್ಕೆ ಭೇಟಿಯಿತ್ತ ಸಚಿವರನ್ನು ನಾಡಿನ ಜನ ಅದ್ಧೂರಿಯಾಗಿ ಮೆರವಣಿಗೆಯಲ್ಲಿ ಸ್ವಾಗತಿಸಿದ್ದು (ಪ್ರ.ವಾ., ಆ. 17) ಹಾಗೂ 75ನೇ ಸ್ವಾತಂತ್ರ್ಯೋತ್ಸವದಂದು ಕಲಘಟಗಿಯಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಮೆರವಣಿಗೆಯಲ್ಲಿ ಸಹಸ್ರಾರು ಜನ ಪಾಲ್ಗೊಂಡು, 2 ಕಿ.ಮೀ. ಉದ್ದದ ತ್ರಿವರ್ಣ ಧ್ವಜ ಹಿಡಿದು ಸಾಗಿದ್ದು (ಪ್ರ.ವಾ., ಆ. 16) ಹೆಮ್ಮೆಯ ವಿಷಯಗಳೇ. ಆದರೆ ಕೊರೊನಾದಿಂದ ಜನ ಬಳಲಿ ಬೆಂಡಾಗಿರುವ ಈ ವಿಷಮ ಪರಿಸ್ಥಿತಿಯಲ್ಲಿ ಮಾಸ್ಕ್ ಧರಿಸದೆ, ಪರಸ್ಪರ ಅಂತರ ಕಾಯ್ದುಕೊಳ್ಳದೆ ಗುಂಪು ಗುಂಪಾಗಿ ಸ್ವಾಗತ ಕೋರುವುದು, ಮೆರವಣಿಗೆ ಮಾಡುವುದು ಆಘಾತಕಾರಿ ವಿಷಯ.