ಜೋಗದಲ್ಲಿ ತಂಗಿದ್ದ ರಾಜ್ಯಪಾಲರನ್ನು ಖುಷಿಪಡಿಸಲಿಕ್ಕಾಗಿ ಲಿಂಗನಮಕ್ಕಿ ಜಲಾಶಯದಿಂದ 800 ಕ್ಯುಸೆಕ್ಸ್ ನೀರನ್ನು ಯಾವುದೇ ಮುನ್ಸೂಚನೆ ನೀಡದೆ ಪೋಲು ಮಾಡಿದ ವಿಚಾರ ತಿಳಿದು ಬೇಸರವಾಯಿತು. ಅನ್ನದಾತ ಬೆಳೆದ ಬೆಳೆಗೆ ನೀರು ಸಾಲದೆ ಒಣಗಿದ ಸಂದರ್ಭದಲ್ಲಿ ನೀರು ಕೇಳಿದರೆ ನೂರೆಂಟು ಸಬೂಬು ಹೇಳುವ ಅಧಿಕಾರಿಗಳು, ಈಗ ಒಬ್ಬ ವ್ಯಕ್ತಿಯ ವೈಯಕ್ತಿಕ ಖುಷಿಗಾಗಿ ಇಷ್ಟೊಂದು ಪ್ರಮಾಣದ ನೀರು ಹರಿಸಿರುವುದು ಅಕ್ಷಮ್ಯ.