ಒಮ್ಮೆ ಪ್ರಯಾಣಕ್ಕೆ 30 ಜನ ಎಂದು ನಿಗದಿಪಡಿಸಿರುವುದು ನಿಯಮಗಳ ದಾಖಲೆಯಲ್ಲಿ ಮಾತ್ರ ಸಾಧ್ಯವೇನೊ! ಲಾಕ್ಡೌನ್ ಶುರುವಾದಾಗ ಜಿಲ್ಲಾ ಕೇಂದ್ರದಿಂದ ತಾಲ್ಲೂಕು ಕೇಂದ್ರಕ್ಕೆ ಕೆಎಸ್ಆರ್ಟಿಸಿ ಬಸ್ಗಳನ್ನು ಅಗತ್ಯ ಸೇವೆಯ ಸಿಬ್ಬಂದಿಗೆಂದು ಬಿಟ್ಟಿದ್ದರು. ಇದರಲ್ಲಿ ದಿನವೂ 40-50 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಮೊದಲು, ನಿಯಮದಂತೆ 30 ಟಿಕೆಟ್ಗಳನ್ನು ಮಾತ್ರ ಕೊಡಲಾಗುತ್ತಿತ್ತು. ಆದರೆ 30ರ ನಂತರದ ಯಾವುದೇ ಪ್ರಯಾಣಿಕರಿಗೆ ಹಣ ಪಡೆದು ಟಿಕೆಟ್ ನೀಡುತ್ತಿರಲಿಲ್ಲವಾದರೂ ಬಸ್ನಲ್ಲಿ ಕರೆದುಕೊಂಡು ಹೋಗುತ್ತಿದ್ದರು!