ಉಪಚುನಾವಣೆಯಲ್ಲಿ ಗೆಲುವು ಕಂಡಿರುವ ಶಾಸಕರಿಗೆ ಸಚಿವ ಸ್ಥಾನ ಕರುಣಿಸುವ ಮತ್ತು ಅವರಿಗೆ ಖಾತೆ ಹಂಚುವ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಕ್ಕಟ್ಟಿಗೆ ಸಿಲುಕಿದ್ದಾರೆ ಎಂದು ವರದಿಯಾಗಿದೆ (ಪ್ರ.ವಾ., ಜ. 9). ಇದನ್ನು ಲಾಟರಿ ಮುಖಾಂತರ ಹಂಚಿಕೆ ಮಾಡಿದರೆ, ಎದುರಾಗಿರುವ ಬಿಕ್ಕಟ್ಟನ್ನು ಯಾವ ಶಾಸಕರಿಗೂ ನಿರಾಸೆಯಾಗದಂತೆ ಸುಲಭವಾಗಿ ಪರಿಹರಿಸಬಹುದು. ಎಲ್ಲಾ ಶಾಸಕರಿಗೆಈ ಸಲಹೆ ಒಪ್ಪಿಗೆಯೂ ಆಗಬಹುದು.