ನಿವೃತ್ತ ಅಧಿಕಾರಿಗಳು ಲಾಬಿ ನಡೆಸಿ, ಸರ್ಕಾರಿ ಸ್ವಾಮ್ಯದ ಹಲವಾರು ನಿಗಮ, ಮಂಡಳಿಗಳ ಬಹುತೇಕ ಉನ್ನತ ಹುದ್ದೆಗಳಿಗೆ ಮತ್ತೆ ಮತ್ತೆ ಬಂದು ಕೂರುತ್ತಿದ್ದಾರೆ. ಇಂತಹವರಿಂದಾಗಿ ಎಷ್ಟೋ ವಿದ್ಯಾವಂತರು ಉದ್ಯೋಗ ವಂಚಿತರಾಗುತ್ತಿದ್ದಾರೆ. ಸರ್ಕಾರ ಈ ನಿವೃತ್ತ ಉದ್ಯೋಗಿಗಳನ್ನು ಮತ್ತೆ ಮತ್ತೆ ಕೆಲಸದಲ್ಲಿ ಮುಂದುವರಿಸುವ ಬದಲು, ವಿದ್ಯಾವಂತ ಯುವಜನರಿಗೆ ಉದ್ಯೋಗ ನೀಡಬಾರದೇ?